ಮಡಿಕೇರಿ (web@timesofcoorg) : ಕೊಡಗು ಜಿಲ್ಲೆಯ ಶ್ರೀಮಂಗಲ ಪೋಲೀಸ್ ಸರಹದ್ದಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಹಾಡ ಹಗಲು ಇಬ್ಬರು ಮಹಿಳೆಯರಿಗೆ ಕತ್ತಿ ಯಿಂದ ಕಡಿದು ಕೊಲೆ ಯತ್ನ ನಡೆದಿದೆ. ಪ್ರೇಮ ಎಂಬ ಮಹಿಳೆ ಸ್ಥಳದಲ್ಲಿ ಸಾವನಪ್ಪಿದ್ದು, ಮತ್ತೊರ್ವ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಆಸ್ತಿ ಸಂಬಂಧವಾಗಿ ಸಂಬಧಿಕರೊಬ್ಬರಿಂದ ಕೊಲೆ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಶ್ರೀಮಂಗಲ ಪೋಲೀಸರು ಎಸ್ ಪಿ ಸ್ಥಳಕ್ಕೆ ಬರುತ್ತಿರುವ ಮಾಹಿತಿ ನೀಡಿದ್ದಾರೆ. .ನಿನ್ನೆ ಸಂಜೆ ನೆಡೆದಿರುವ ಕೊಲೆಯಾಗಿದ್ದು, ಇಂದು ಬೆಳಿಗ್ಗೆ ಮಹಿಳೆಯ ಶವ ದಾರಿಯಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.
No comments
Post a Comment