*Mubarak Newsline Media*
ಸಿದ್ದಾಪುರ:-ದುಬೈ ಉದ್ಯೋಗಿಗಳಾಗಿ ನೆಲೆಸಿರುವ ಕೊಡಗು ಜಿಲ್ಲೆಯ ಯುವಕರು ಒಗ್ಗೂಡಿ ರಂಜಾನ್ ಹಬ್ಬದ ಅಂಗವಾಗಿ ಈದ್ ಮೀಟ್ ಕ್ರಿಕೆಟ್ ಪಂದ್ಯಾವಳಿಯನ್ನ ಶಾರ್ಜಾ ಸ್ಕೈಲೈನ್ ಯುನಿವರ್ಸಿಟಿ ಕಾಲೇಜ್ ಮೈದಾನದಲ್ಲಿ ಅಯೋಜಿಸಲಾಗಿತ್ತು. ದುಬೈ ಯು ಅಂಡ್ ಐ ಕಂಪನಿಯ ಮುಖ್ಯಸ್ಥಮೈಸೂರು ಅಬ್ದುಲ್ ಖಾದರ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಉದ್ಯೋಗ ನಿಮಿತ್ತ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಯುವ ಕ್ರೀಡಾಪಟುಗಳನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವಲ್ಲಿಕ್ರಿಕೆಟ್ ಪಂದ್ಯಾವಳಿ ಆಯೋಜಕರ ಕ್ರೀಡಾಭಿಮಾನದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ದುಶ್ಚಟಗಳಿಂದ ದೂರವಿದ್ದು ಉದ್ಯೋಗದ ಮೂಲಕ ಭವಿಷ್ಯ ರೂಪಿಸಿಕೊಂಡು ಕ್ರೀಡೆಯ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.ದುಬೈ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ನೆಲೆಸಿರುವ ಕೊಡಗಿನ ಕ್ರೀಡಾಪಟುಗಳಿಗೆ ಮುಕ್ತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿ ಸುಮಾರು9 ತಂಡಗಳು ಭಾಗವಹಿಸಿದ್ದವು ಅಂತಿಮ ರೋಮಾಂಚನಕಾರಿ ಪಂದ್ಯಾಟದಲ್ಲಿ ಚಾಮಿಯಾಲ ಸಿ ವೈ ಸಿ ತಂಡವನ್ನು ಮಣಿಸಿ ನೂರುದ್ದೀನ್ ನಾಯಕತ್ವದ ಬುಗಾಂಬೊ ಎಫ್ ಸಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಪ್ರಥಮ ನಗದು ಪ್ರಶಸ್ತಿ ಬಹುಮಾನ ಪಡೆದುಕೊಂಡಿತು.ಕಲೀಲ್ ನಾಯಕತ್ವದಚಾಮಿಯಾಲ ಸಿ ವೈ ಸಿ ತಂಡ ದ್ವಿತೀಯ ಸ್ಥಾನದೊಂದಿಗೆ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ಪಂದ್ಯಾಟದಲ್ಲಿಬುಗಾಂಬೊ ಎಫ್ ಸಿ ತಂಡದ ಆಟಗಾರ ವಿರಾಜಪೇಟೆ ನೂರುದ್ದೀನ್ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ,ಹೈಯೆಸ್ಟ್ ಸಿಕ್ಸರ್, ಮ್ಯಾನ್ ಆಫ್ ದಿ ಸೀರಿಯಸ್ ಪ್ರಶಸ್ತಿಯನ್ನುತಮ್ಮದಾಗಿಸಿಕೊಂಡರು.ಸಿ ವೈ ಸಿ ಚಾಮಿಯಾಲ ತಂಡದ ಜಿಯಾ ಉತ್ತಮ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ,ಚಾಮಿಯಲ ತಂಡದ ಇರ್ಫಾನ್ ಕುವಾಲೆ ಬೆಸ್ಟ್ ಕ್ಯಾಚರ್ ಪ್ರಶಸ್ತಿ,ಬುಗಾಂಬೊ ಎಫ್ ಸಿ ತಂಡದ ನೌಶಿರ್ ಉತ್ತಮ ಫೀಲ್ಡರ್ ಪ್ರಶಸ್ತಿ,ಸೈದು ಉತ್ತಮ ಬೌಲರ್ ಪ್ರಶಸ್ತಿ ಪಡೆದುಕೊಂಡರು.ಪಂದ್ಯಾವಳಿಯಲ್ಲಿಸಾಗರ್ ಫ್ರೆಂಡ್ಸ್, ಅಯ್ಯಂಗೇರಿ ಫ್ರೆಂಡ್ಸ್, ಆರ್ ವೈ ಸಿ ಎಮ್ಮೆ ಮಾಡು, ಫೋರ್ ಸ್ಟಾರ್ ಎಡಪಲ, ಕೆ ವೈ ಸಿ ಸಿ ಕಡಂಗ, ಕೊಂಡಂಗೇರಿ ಫ್ರೆಂಡ್ಸ್, ಜಾವಾ ಲೆಗೆಂಡ್ ಸುಂಟಿಕೊಪ್ಪ ತಂಡಗಳು ಭಾಗವಹಿಸಿದ್ದವು.ಸಮಾರಂಭ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತುಕ್ರಿಕೆಟ್ ಪಂದ್ಯಾವಳಿ ಆಯೋಜಕರಾದ ನಿಶಾಬ್ ನೆಲ್ಲಿಹುದಿಕೆರಿ , ದಿಲ್ಶಾನ್ ನಾಪೋಕ್ಲು,ಸೈಯದ್ ಗುಂಡಿಗೆರೆ,ನೂರುದ್ದೀನ್ ಕಲ್ಲುಬಾಣೆ,ಪ್ರಮುಖರಾದ ಕುಂಡಂಡ ರಪೀಕ್ ಕುಂಜಿಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
No comments
Post a Comment