ಮಹಿಳಾ ಸಾಧಕಿಯರಿಗೆ ಸನ್ಮಾನ ಗೌರವ

No comments
newsline media 
ಸಿದ್ದಾಪುರ :-  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು  ಮಹಿಳಾ ಸಾಧಿಕಿಯರಿಗೆ ಹೊದ್ದೂರು ಕಬಡಕೇರಿ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ  ಸನ್ಮಾನಿಸಿ ಗೌರವಿಸಲಾಯಿತು.
 ಅಂಗನವಾಡಿ ಬಾಲ ವಿಕಾಸ ಸಮಿತಿ, ಹಿಂದೂ ರುದ್ರ ಭೂಮಿ ಸೇವಾ ಸಮಿತಿ, ಧರ್ಮಸ್ಥಳ ಸ್ವಸಹಾಯ    ಸಹಕಾರ ಸಂಘದ    ವತಿಯಿಂದ 
 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ವಿಜೇತ ಎಂ. ಈ ತಂಸೀನ್ ಬಾನು, ಡಾಕ್ಟರೇಟ್ ಪದವಿ ಪಡೆದ ಚೆಟ್ಟಿಮಾಡ ಡಾ.ಪೂಜಾಶ್ರೀ, ಆಶಾ ಕಾರ್ಯಕರ್ತೆ ಮುಮ್ತಾಜ್ , ಅಂಗನವಾಡಿ ಸಹಾಯಕಿ ಬಿ.ಜಿ ಪ್ರೇಮ,ಬಾಲವಿಕಾಶ ಸಮಿತಿ ಅಧ್ಯಕ್ಷೆ  ಹಂಸಾವತಿ ಅವರನ್ನ ಮಹಿಳಾ ದಿನಾಚರಣೆ ಅಂಗವಾಗಿ  ಸನ್ಮಾನಿಸಿ ಗೌರವಿಸಲಾಯಿತು.  ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಕುಸುಮಾವತಿ  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶರಸು, ಹಿಂದೂ ರುದ್ರ ಭೂಮಿ ಸೇವಾ ಸಮಿತಿ  ಅಧ್ಯಕ್ಷ  ಸತೀಶ್,ಜ್ಞಾನ ಜ್ಯೋತಿ ವಿಧ್ಯಾ ಸಂಸ್ಥೆಯ  ಶಿಕ್ಷಕಿ ಸ್ಮಿತಾ,ಮಹಿಳಾ ಸಮಾಜದ ಉಪಾಧ್ಯಕ್ಷೆ ರುಕ್ಮಣಿ,ಧರ್ಮಸ್ಥಳ ಸಂಘದ  ಸೇವಾ ಪ್ರತಿನಿಧಿ ಕಾವೇರಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಜಲಜಾಕ್ಷಿ ಪ್ರಮುಖರಾದ ಅನಿತಾ ಅಪ್ಪಣ್ಣ, ಕುಮಾರ ಪ್ರಸಾದ್,  ಚೌರಿರ ಸಲೀನ ಜಗತ್, ಸುದರ್ಸಿ ಜಗತ್,ಸುರೇಶ್,ನಿವ್ಯ ಕುಮಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಬಹುಮಾನ ವಿತರಿಸಿದರು.

No comments

Post a Comment