ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg): ಖಾಸಗಿ ಬಸ್ ಹಾಗೂ ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಮತ್ತು ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು ಸಮೀಪದ ಕೊಳಕೇರಿ ರಸ್ತೆಯ ನೂರಂಬಡ ಮಠದ ತಿರುವಿನಲ್ಲಿ ನಡೆದಿದೆ.
ನಾಪೋಕ್ಲುವಿನಿಂದ ಮದ್ಯಾಹ್ನ 2.30 ಗಂಟೆಗೆ ಕೊಳಕೇರಿ ಕಕ್ಕಬ್ಬೆ ಮಾರ್ಗವಾಗಿ ವಿರಾಜಪೇಟೆ ಹೋಗುವ ಖಾಸಗಿ ಬಸ್(ರೋಹಿಣಿ )ಹಾಗೂ ಕೊಳಕೇರಿ ಕಡೆಯಿಂದ ನಾಪೋಕ್ಲುವಿಗೆ ಬರುತ್ತಿದ್ದ ಆಟೋರಿಕ್ಷಾ ಗೆ ಮುಖಾಮುಕಿ ಅಪಘಾತ ಸಂಭವಿಸಿ ಆಟೋ ಚಾಲಕ ನಿಶಾಂತ್ ಹಾಗೂ ಪ್ರಯಾಣಿಕ ಅಪ್ಪಾಜಿ ಎಂಬುವವರಿಗೆ ತಲೆ ಮತ್ತು ಕಾಲು ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಇವರನ್ನು ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments
Post a Comment