ಮಡಿಕೇರಿ ನಗರ (toc/ಪ್ರತಿನಿಧಿ) : ಉಡುಪಿಯ ಹಿಜಾಬ್ ಪ್ರಕರಣ ಸಂಬಂಧ ರಾಜ್ಯಾದ್ಯಾಂತ ಕಾಲೇಜುಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿಗೆ ಮೂವತ್ತರಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಬಂದಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕಾಲೇಜು ಪ್ರವೇಶಿಸಿದ್ದು, ಸದ್ಯ ಯಾವುದೇ ಘಟನೆಗಳಿಲ್ಲದೆ ಶಾಂತವಾಗಿದ್ದ ಕೊಡಗು ಜಿಲ್ಲೆಯನ್ನು ಹಿಜಾಬ್ ಪ್ರಕರಣಕ್ಕೆ ತಳ್ಳಿದಂತಾಗಿದೆ.
No comments
Post a Comment