*ವಾರ್ಷಿಕ ಸಾಧಕ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ನೌಶಾದ್ ಜನ್ನತ್*.

No comments
ಕುಶಾಲನಗರ : ಸಮಾಜ ಸೇವೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ನಮ್ಮ ಕೊಡಗು ತಂಡದ ಸಂಸ್ಥಾಪಕ ಹಾಗೂ ಸಾಹಿತಿ  ಕುಶಾಲನಗರದ ನೌಷಾದ್ ಜನ್ನತ್ ಗೆ ತನುಶ್ರೀ ವಾರ್ಷಿಕ ಸಾಧಕ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಚಿತ್ರದುರ್ಗದ ತನುಶ್ರೀ  ಪ್ರಕಾಶನ ಸಂಸ್ಥೆ ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರವನ್ನು ಸೇವಾ ಸಾಧಕರಿಗೆ ಗೌರವಿಸಲು ಪ್ರಶಸ್ತಿ ಪ್ರದಾನ  ಸಮಾರಂಭವನ್ನ ಸೂಲೇನಹಳ್ಳಿಯಲ್ಲಿ ಆಯೋಜಿಸಲಾಗಿದೆ.ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಸಾಧಕರಾಗಿರುವ 5ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ನೌಶಾದ್ ಜನ್ನತ್ ಬಗ್ಗೆ  ಹಲವು ವರ್ಷಗಳಿಂದ ನಮ್ಮ ಕೊಡಗು ತಂಡವನ್ನ ಕಟ್ಟಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದಲ್ಲದೆ.ನದಿ ದಡ ಪ್ರವಾಹ ಸಂತ್ರಸ್ತರಿಗೆ ತುರ್ತು ಸಂದರ್ಭಕ್ಕೆ ಬೇಕಾದ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಲಾಗಿದೆ.ಕೋವಿಡ್ ಸಂದರ್ಭದಲ್ಲಿ ಆದಿವಾಸಿಗಳು ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಅರ್ಹರಿಗೆ ಕಿಟ್ ಗಳನ್ನು ವಿತರಿಸಲಾಗಿದೆ.ಆರೋಗ್ಯ, ಶಿಕ್ಷಣ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ಹಲವಾರು ಸಮಾಜ ಸೇವೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.ಕಳೆದ ಹಲವು ವರ್ಷಗಳ ಸಾಮಾಜಿಕ ಕಳಕಳಿಯ ಸೇವೆಯನ್ನು ಪರಿಗಣಿಸಿ ಈಗಾಗಲೇ ಹಲವಾರು ಪ್ರಶಸ್ತಿಗಳಾದ
 1)ಉತ್ತರ ಕರ್ನಾಟಕದ ಪ್ರತಿಷ್ಠಿತ ಮತ್ತು ಪಂಡಿತ್ ಪುಟ್ಟರಾಜು ಗವಾಯಿಯವರು  ಪ್ರಥಮವಾಗಿ ಪಡೆದ ಪ್ರಸಿದ್ದ *2019ನೇ ಸಾಲಿನ ನವರತ್ನ ರಾಜ್ಯ ಪ್ರಶಸ್ತಿ*
2)ರಾಜ್ಯ ಕಾರ್ಮಿಕರ ಒಕ್ಕೂಟ ನೀಡುವ *2018ನೇ ಸಾಲಿನ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ*
3)ಕನ್ನಡ ಮನಸುಗಳ ಪ್ರತಿಷ್ಠಾನದ *2018ನೇ ಸಾಲಿನ ಕನ್ನಡ ಸೇವಾ ರತ್ನ ಪ್ರಶಸ್ತಿ*
4)ಕರ್ನಾಟಕ ಸರಕಾರ ಚೊಚ್ಚಲ ಕೃತಿಗೆ ನೀಡುವ *2019ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ*
5)ಬನವಾಸಿ ಕನ್ನಡಿಗರು ನೀಡುವ *2020 ನೇ ಸಾಲಿನ ಬನವಾಸಿ ಕನ್ನಡಿಗ ಪ್ರಶಸ್ತಿ*
6)ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟೇಬಲ್ ಸಂಸ್ಥೆ, ದಾವಣಗೆರೆ, ನೀಡುವ *2021ನೇ ಸಾಲಿನ ರಾಜ್ಯಮಟ್ಟದ "ಜನ ಸೇವಾ ರತ್ನ ಪ್ರಶಸ್ತಿ"*
7)ಜಯಕರ್ನಾಟಕ ಸಂಘಟನೆ ನೀಡುವ *2021ನೇ ಸಾಲಿನ ಜಯಕರ್ನಾಟಕ ಪ್ರಶಸ್ತಿ ಲಭಿಸಿದ್ದು  ರಾಜ್ಯದ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಉತ್ತಮ ಬರಹಗಾರರಾಗಿರುವ ನೌಷಾದ್. ಕಡಮಕಲ್ಲು ಹಾಗೂ ಜಲಪ್ರಳಯ  ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ

No comments

Post a Comment