ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಉಪಾದ್ಯಕ್ಷರಾಗಿ ಎಂ.ಎನ್.ಪ್ರೇಮವಸಂತ್ ನೇಮಕ

No comments

 ಕೊಡ್ಲಿಪೇಟೆ (web@timesofcoorg) :ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾದ್ಯಕ್ಷರಾಗಿ  "ಎಂ.ಎನ್.ಪ್ರೇಮವಸಂತ್ ರನ್ನು ನೇಮಕ ಮಾಡಲಾಗಿದೆ,

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ತಾಕೇರಿ ರವರ ಶಿಪಾರಸ್ಸಿನಂತೆ ಕಾರ್ಮಿಕ ವಿಭಾಗದ ಜಿಲ್ಲಾದ್ಯಕ್ಷ ಟಿ.ಡಿ.ಗೊವಿಂದರಾಜ್ ದಾಸ್  ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಾತಿ ಆದೇಶ ಪತ್ರವನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿತರಿಸಿದರು,


ಕೊಡ್ಲಿಪೇಟೆ ಸಮೀಪದ ನೀರುಗುಂದ ಗ್ರಾಮದ ನಿವಾಸಿಯಾದ ಪ್ರೇಮವಸಂತ್ ದಲಿತ ಸಂಘಟನೆಯ ರಾಜ್ಯ ಸಮಿತಿಯಲ್ಲಿ  ಹಾಗೂ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ


No comments

Post a Comment