ಸೋಮವಾರಪೇಟೆ ಸಮೀಪ ಯಡೂರು ಬಿಟಿಸಿಜಿ ಕಾಲೇಜಿನಲ್ಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳ ನಡುವೆ ವಾಗ್ವಾದ

No comments

ಸೋಮವಾರಪೇಟೆ (TOC/ಪ್ರತಿನಿಧಿ): ಉಡುಪಿಯ ಹಿಜಾಬ್ ವಿವಾದ ರಾಜ್ಯದ್ಯಾಂತ ವ್ಯಾಪಿಸಿ ಹಿಂಸಾಚಾರದ ತನಕ ತಲುಪಿ ನಿಂತ ಸಂದರ್ಭ ಶಾಂತವಾಗಿದ್ದ ಕೊಡಗು ಜಿಲ್ಲೆಯು ಹಿಜಾಬ್ ವಿವಾದದ ಬೀಡಾಗಿ ಮಾರ್ಪಾಡುಗೊಳ್ಳುತಿದೆ. ಸೋಮವಾರಪೇಟೆ ಪಟ್ಟಣ ಸಮೀಪದ ಯಡೂರು ಬಿಟಿಸಿಜಿ ಕಾಲೇಜಿಗೆ ಇಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದು, ಇತರ ವಿದ್ಯಾರ್ಥಿಗಳೊಂದಿಗಿ ವಾಗ್ವಾದ ನಡೆದಿದೆ. ಕಾಲೇಜ್ ಕ್ಯಾಂಪಸ್ ಒಳಗಡೆ ಜೈಶ್ರೀರಾಮ್ ಘೋಷಣೆ ಕೂಗುತ್ತಾ ಬಂದ ತಂಡವನ್ನು ಪ್ರಾಧ್ಯಾಪಕರು ಹೊರಾಂಗಣದಲ್ಲಿ ತಡೆದಿದ್ದಾರೆ. ಈ ಸಂದರ್ಭ ಇತರೆ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆದಿದೆ.

ಈ ಕುರಿತು TOCಯೊಂದಿಗೆ ಮಾತನಾಡಿದ ಕಾಲೇಜು ವಿದ್ಯಾರ್ಥಿ ಅಸ್ಪಾದ್ " ಹಿಜಾಬ್ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ಆಗಿದ್ದು, ಈ ದೇಶದ ಸಂವಿಧಾನ ಕಲ್ಪಿಸಿರುವ ಧಾರ್ಮಪಾಲನಾ ಸ್ವಾತಂತ್ರ್ಯದಂತೆ ಮುಸ್ಲಿಂ ಹೆಣ್ಣುಮಕ್ಕಳ್ಳು ಹಿಜಾಬ್ ಧರಿಸುತ್ತಾರೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ, ಬಿಡೋದು ಇಲ್ಲ, ಇವರಿಗೆ ಇದ್ದ ನಿಯಮವನ್ನು ಮುಂದುವರಿಸಬೇಕು. ಕೇಸರಿ ಶಾಲು ಧರಿಸಿ ಬಂದು ರಾದ್ಧಾಂತ ಮಾಡುವುದು ರಾಜಕೀಯ ಲಾಭಕ್ಕಾಗಿ ಎಂದರು.



No comments

Post a Comment