SKSSF ಮೀಲಾದ್ ಕಾನ್ಫರೆನ್ಸ್, ನೂರೇ ಅಜ್ಮೀರ್, ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಅಶ್ರಫ್ ಫೈಝಿ ಕರೆ

No comments
newsline media kodagu
ಸಿದ್ದಾಪುರ :-
2024 ಫೆಬ್ರವರಿ 02, 03, 04 ದಿನಾಂಕಗಳಲ್ಲಿ*ಸತ್ಯ,ಸಮತ್ವ, ಸಮರ್ಪಣೆ* ಎಂಬ ಧ್ಯೇಯ ವಾಕ್ಯದಡಿ  ಕೇರಳದ ಕಲ್ಲಿಕೋಟೆಯಲ್ಲಿ  SKSSF 35 ನೇ ವಾರ್ಷಿಕ ಐತಿಹಾಸಿಕ ಮಹಾ ಸಮ್ಮೇಳನವು ನಡೆಯಲಿದೆ. ಸಮಸ್ತ ಎಂಬ ಆಧ್ಯಾತ್ಮಿಕ ಉಲಮಾ ಒಕ್ಕೂಟವನ್ನು ಬಲಪಡಿಸುವುದು,ಹಾಗೂ ಪವಿತ್ರ  ಅಹ್ಲು ಸುನ್ನತ್ ವಲ್ ಜಮಾಅತ್ ಎಂಬ ಇಸ್ಲಾಮಿನ ನೈಜ ರೂಪವನ್ನು ಸಂರಕ್ಷಿಸುವುದು, ವಿದ್ಯಾರ್ಥಿಗಳಿಗೆ ಲೌಕಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸ ನೀಡುವುದರ ಮೂಲಕ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು, ವಿದ್ಯಾರ್ಥಿಗಳ ಹೃದಯದಲ್ಲಿ ದೇಶಪ್ರೇಮ, ಮಾನವೀಯತೆ, ವಿನಯ, ಸೇವಾಮನೋಭಾವಗಳನ್ನು ಬೆಳೆಸುವುದು, ಇವೆಲ್ಲವೂ SKSSF ಸಂಘಟನೆಯ ಗುರಿಯಾಗಿದ್ದು ಈಗಾಗಲೇ ವಿಜ್ಞಾನ ವಿನಯ ಸೇವೆ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಎಸ್ ಕೆ ಎಸ್ ಎಸ್ ಎಫ್ 35 ವರ್ಷ ಪೂರ್ತಿಕರಿಸಿ 35ನೇ ವಾರ್ಷಿಕ ಮಹಾಸಮ್ಮೇಳನವನ್ನು ಆಯೋಜಿಸುತ್ತಿರುವ ಶುಭ ಸಂದರ್ಭದಲ್ಲಿ ಪ್ರಸ್ತುತ ಸಮ್ಮೇಳನದ  ಪ್ರಚಾರಾರ್ಥ  ಇದೇ ಬರುವ ಅಕ್ಟೋಬರ್ 11 ಬುಧವಾರ SKSSF ಕೊಡಗು ಜಿಲ್ಲಾ ಸಮಿತಿಯು ಹಮ್ಮಿಕೊಂಡಿರುವ ನೂರೇ ಅಜ್ಮೀರ್ ಹಾಗೂ ಮೀಲಾದ್ ಕಾನ್ಫರೆನ್ಸ್, ಜಿಲ್ಲಾ ಸಮ್ಮೇಳನವನ್ನು ಕುಶಾಲನಗರದಲ್ಲಿ ಆಯೋಜಿಸಿದ್ದು  ಪ್ರಸ್ತುತ ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ಹಾಗೂ ಪೋಷಕ ಸಂಘಟನೆಗಳ ಸರ್ವ ಕಾರ್ಯಕರ್ತರೂ ಹಾಗೂ ಎಲ್ಲಾ ದೀನೀ ಸ್ನೇಹಿಗಳೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ SYS ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ ಎಂ ವೈ ಅಶ್ರಫ್ ಫೈಝಿ  ಕರೆ ನೀಡಿದ್ದಾರೆ.

No comments

Post a Comment