ದಾರಿ ತಪ್ಪುತ್ತಿರುವ ಯುವ ಸಮೂಹಕ್ಕೆ.ಒಳಿತಿನ ಮಾರ್ಗದರ್ಶನ. ಹುಂಡಿ ಎಸ್ ಎಸ್ ಎಫ್ ವಲಯ ಸಮಿತಿ ಆಯೋಜನೆ.

No comments
ಸಿದ್ದಾಪುರ :ಸಾಮಾಜಿಕ ಜಾಲತಾಣ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹಕ್ಕೆ ಒಳಿತಿನ ಮಾರ್ಗದರ್ಶನ ಅತ್ಯಗತ್ಯ ವಾಗಿದ್ದು ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಮುಂದಾಗಬೇಕೆಂದು ಗ್ಲೋಬಲ್ ಪಲ್ಸ್  ಫೌಂಡೇಶನ್ ನಿರ್ದೇಶಕ ಸಲೀಂ ಪಯ್ಯೋಳಿ ಸಲಹೆ ನೀಡಿದರು. ಕರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ ನ ಹುಂಡಿ ಎಸ್ ಎಸ್ ಎಫ್ ವಲಯ ಸಮಿತಿ ವತಿಯಿಂದ ಜುಮಾ ಮಸೀದಿ ಆವರಣದಲ್ಲಿ  ಆಯೋಜಿಸಲಾಗಿದ್ದ ವಾಟ್ ಈಸ್  ರಿಯಲ್ ಹ್ಯಾಪಿನೆಸ್  ಎಂಬ  ಭವಿಷ್ಯದ ಚಿಂತನ ಮಂಥನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಯುವ ಸಮೂಹ ಸಾಮಾಜಿಕ ಜಾಲತಾಣ ಹಾಗೂ ಮಾದಕ ವ್ಯಸನಿಗಳೊಂದಿಗೆ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದು ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಒಳಿತಿನ ಮಾರ್ಗದರ್ಶನ ಅಗತ್ಯವಾಗಿದ್ದು ಪೋಷಕರು ಹಾಗೂ ವಿದ್ಯಾರ್ಥಿಗಳು ಹೊಂದಾಣಿಕೆಯೊಂದಿಗೆ  ಪ್ರೀತಿ ವಾತ್ಸಲ್ಯದಿಂದ ಒಳಿತಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು  ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸುಂದರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದಾರಿ ತಪ್ಪುತ್ತಿದ್ದು ದುಶ್ಚಟಗಳಿಂದ ದೂರ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಹುಂಡಿ ಎಸ್ಸೆಸ್ಸೆಫ್ ವಲಯ ಸಮಿತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ.ಪ್ರತಿ ಗ್ರಾಮದಲ್ಲೂ ಇಂಥ ಭವಿಷ್ಯದ ಚಿಂತನ ಕಾರ್ಯಕ್ರಮಗಳು ಅದೆಷ್ಟೋ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.ಮಹಲ್ ಅಧ್ಯಕ್ಷ ಮಹಮ್ಮದ್  ಹಾಜಿ, ಮಸೀದಿ ಖತಿಬ್ ನೌಶಾದ್'ಸಮಿತಿ ಯ ಅಧ್ಯಕ್ಷ  ಸೈಫುದ್ದೀನ್, ಕಾರ್ಯದರ್ಶಿ ಉನೈಸ್, ಸಹ ಕಾರ್ಯದರ್ಶಿ  ಸಫೀಕ್,ಎಸ್ಸೆಸ್ಸೆಫ್ ವಲಯ ಅಧ್ಯಕ್ಷ ಹ್ಯಾರಿಸ್, ಎಸ್ ವೈ ಎಸ್ ಅಧ್ಯಕ್ಷ  ಮುಸ್ತಫಾ ಸಖಾಫಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಹುಂಡಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು      

No comments

Post a Comment