ನೌಷಾದ್ ಜನ್ನತ್ ಗೆ ರಾಜ್ಯ ಮಟ್ಟದ "ನವರತ್ನ ಪ್ರಶಸ್ತಿ"


ವರದಿ : ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ (TOC ನ್ಯೂಸ್): ಶಿವಮೊಗ್ಗ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ವೈದ್ಯ ಕಿರಣ ರಾಷ್ಟ್ರೀಯ ಪತ್ರಿಕೆ ಮತ್ತು ಆಯುಷ ಟಿವಿಯವರು ಕೊಡಮಾಡುವ ಪ್ರಸಕ್ತ ಸಾಲಿನ "ನವರತ್ನ " ಪ್ರಶಸ್ತಿಗೆ ಕೊಡಗು ಜಿಲ್ಲೆಯ ನಮ್ಮ ಕೊಡಗು ಚಾರಿಟಬಲ್ ಟ್ರಸ್ಟ್ (ರಿ) ಅಧ್ಯಕ್ಷ ನೌಷಾದ್ ಜನ್ನತ್ ಆಯ್ಕೆಯಾಗಿದ್ದಾರೆ. ಇಂದು(ಅಕ್ಟೋಬರ್‌ 31) ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ನಡೆಯಲಿರುವ 7ನೇ ಪಾರಂಪರಿಕ ವೈದ್ಯ ರಾಜ್ಯ ಮಟ್ಟದ ಸಮಾವೇಶ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ "ನಮ್ಮ ಕೊಡಗು ಚಾರಿಟಬಲ್ ಟ್ರಸ್ಟ್ (ರಿ)ಅಧ್ಯಕ್ಷ ನೌಷಾದ್ ಜನ್ನತ್ ಅವರಿಗೆ" ನವರತ್ನ" ಪ್ರದಾನ ಮಾಡಲಾಗುವುದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಪ್ರಮುಖರು ತಿಳಿಸಿದ್ದಾರೆ.