ಕುಶಾಲನಗರದಲ್ಲಿ ಕೇಸರಿ ಶಾಲು ಧರಿಸಿ ಜಮಾಯಿಸಿದ ವಿದ್ಯಾರ್ಥಿಗಳು : ಜೈ ಶ್ರೀರಾಮ್ ಘೋಷಣೆ....!!

No comments

ಕುಶಾಲನಗರ : ಹಿಜಾಬ್ ವಿವಾದದ ತೀರ್ಪು ಇಂದು ಕೋರ್ಟಿನಲ್ಲಿ ವಾದ ಮಂಡನೆ ನಡೆಯುತ್ತಿರುವಾಗಲೇ, ಜಿಲ್ಲೆಯ ಕುಶಾಲನಗರದಲ್ಲಿಯೂ ಹಿಜಾಬ್ ಹಾಗೂ ಕೇಸರಿ ಶಾಲು ಪರ ವಿವಾದ ನಡೆದಿದೆ. ಹಿಜಾಬ್ ವಿರುದ್ಧ ವಾಗಿ ಕೇಸರಿ ಶಾಲು ಧರಿಸಿ ಬಂದಿದ್ದು, ನಗರದ ಹೃದಯಭಾಗದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್  ಜಮಾಯಿಸಿದ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಇದರಿಂದ ಹಿಜಾಬ್ ವಿವಾದ ತಟ್ಟದೇ ಇದ್ದ ಕೊಡಗಿನ ವಾಣಿಜ್ಯ ನಗರಿ ಕುಶಾಲನಗರವೂ ಸಾಕ್ಷಿಯಾಗಿದೆ. 

ಈ ನಡುವೆ ಜಮಾಯಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು " ಕಾಲೇಜಿಗೆ ಯಾವುದೇ ಕಾರಣಕ್ಕೂ ಬುರ್ಖಾ ಧರಿಸಿ ಬರಲು ಬಿಡಬಾರದು. ಅವರ ಇದನ್ನು ಮುಂದವರಿಸಿದರೆ ನಾವು ಶಾಲು ಧರಿಸಿ ಬರುತ್ತೇವೆ " ಎಂದಿದ್ದಾರೆ.




No comments

Post a Comment