ಚಿಕ್ಕಮಗಳೂರು (TOC ನ್ಯೂಸ್): ಹಬ್ಬದ ಸಂಭ್ರಮದಲ್ಲಿ ಕೆರೆಗೆ ಈಜಲು ಹೋಗಿ ಮೂವರು ಸಾವಿಗೀಡಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಬಿಳೇಕಲ್ಹಳ್ಳಿಯ ಮೂವರು ಬಾಲಕರು ಸೈಕಲ್ ತೊಳೆಯಲು ಕೆರೆಗೆ ತೆರಳಿದ್ದರು. ಈ ವೇಳೆ ಈಜಲೆಂದು ಕೆರೆಗೆ ಇಳಿದಿದ್ದು, ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಇದರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ.
ಮುರುಳಿ[15], ಜೀವಿತ್ [14] ಶಿರಾಜ್ [15] ಮೃತಪಟ್ಟಿದ್ದು, ಶಿರಾಜ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

No comments
Post a Comment