ಮಂಜನಾಡಿ (TOC ನ್ಯೂಸ್) : ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ನೂತನ ಅಧ್ಯಕ್ಷರಾಗಿ ವಿದ್ವತ್ ಶ್ರೇಷ್ಠ ಇಂಡಿಯನ್ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. ಶರಫುಲ್ ಉಲಮಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ರವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಕೋಝಿಕ್ಕೋಡ್ ಕಾರಂದೂರ್ ಮರ್ಕಝ್ ನಲ್ಲಿ ನಡೆದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕಮಿಟಿಯ ಜನರಲ್ ಬೋಡಿ ಸಭೆಯಲ್ಲಿ ಈ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು.
ಅಲ್ ಮದೀನ ನಿರ್ದೇಶಕ ಮಂಡಳಿಯ ಅಧ್ಯಕ್ಷರೂ ಆಗಿರುವ ಶೈಖುನಾ ಎ.ಪಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಾರ್ಯಕಾರೀ ಸಮಿತಿಯನ್ನು ಪುನರ್ರಚಿಸಲಾಯಿತು. ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ( ಅಧ್ಯಕ್ಷರು), ಸಯ್ಯಿದ್ ಇಸ್ಮಾಯೀಲ್ ತಂಙಳ್ ಅಲ್ ಹಾದೀ ಉಜಿರೆ (ಪ್ರಧಾನ ಕಾರ್ಯದರ್ಶಿ), ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮಹಮೂದ್ ಫೈಝಿ ವಾಲೆಮುಂಡೇವು (ಉಪಾಧ್ಯಕ್ಷರುಗಳು), ಮಜೀದ್ ಹಾಜಿ (ಕೋಶಾಧಿಕಾರಿ), ಅಬ್ದುಲ್ ಖಾದಿರ್ ಸಖಾಫಿ, ಏಶಿಯನ್ ಬಾವ ಹಾಜಿ (ಕಾರ್ಯದರ್ಶಿಗಳು) ಹಾಗೂ 15 ಮಂದಿ ಸದಸ್ಯರನ್ನು ಆರಿಸಲಾಯಿತು. ಕೆ,ಪಿ.ಅಬ್ದುಲ್ ಖಾದರ್ ಸಖಾಫಿಯವರನ್ನು ಅಲ್ ಮದೀನ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿಯೂ ನೇಮಿಸಲಾಯಿತು.
ಅಲ್ ಮದೀನ ನಿರ್ದೇಶಕ ಮಂಡಳಿಯ ಅಧ್ಯಕ್ಷರೂ ಆಗಿರುವ ಶೈಖುನಾ ಎ.ಪಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಾರ್ಯಕಾರೀ ಸಮಿತಿಯನ್ನು ಪುನರ್ರಚಿಸಲಾಯಿತು. ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ( ಅಧ್ಯಕ್ಷರು), ಸಯ್ಯಿದ್ ಇಸ್ಮಾಯೀಲ್ ತಂಙಳ್ ಅಲ್ ಹಾದೀ ಉಜಿರೆ (ಪ್ರಧಾನ ಕಾರ್ಯದರ್ಶಿ), ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮಹಮೂದ್ ಫೈಝಿ ವಾಲೆಮುಂಡೇವು (ಉಪಾಧ್ಯಕ್ಷರುಗಳು), ಮಜೀದ್ ಹಾಜಿ (ಕೋಶಾಧಿಕಾರಿ), ಅಬ್ದುಲ್ ಖಾದಿರ್ ಸಖಾಫಿ, ಏಶಿಯನ್ ಬಾವ ಹಾಜಿ (ಕಾರ್ಯದರ್ಶಿಗಳು) ಹಾಗೂ 15 ಮಂದಿ ಸದಸ್ಯರನ್ನು ಆರಿಸಲಾಯಿತು. ಕೆ,ಪಿ.ಅಬ್ದುಲ್ ಖಾದರ್ ಸಖಾಫಿಯವರನ್ನು ಅಲ್ ಮದೀನ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿಯೂ ನೇಮಿಸಲಾಯಿತು.


No comments
Post a Comment