ನ 9ರಂದು ನಂಜನಗೂಡಿಗೆ ಜೈಭೀಮ್ ಜನ ಜಾಗ್ರತಿ ಜಾಥಾ

No comments
ಮೈಸೂರು :- ಬಹುಜನ ಸಮಾಜ ಪಕ್ಷದ ವತಿಯಿಂದ ಸಂವಿಧಾನ ರಕ್ಷಣೆಗಾಗಿ ಕನಾಟಕ ರಾಜ್ಯವ್ಯಾಪಿ ನಡೆಸುತ್ತಿರುವ ಜೈಭೀಮ್ ಜನ ಜಾಗೃತಿಜಾಥಾ ಯಾತ್ರೆ ನ.9ರಂದು ನಂಜನಗೂಡು ವಿಧಾನಸಭಾಕ್ಷೇತ್ರವನ್ನು ಪ್ರವೇಶಿಸಲಿದೆ ಎಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಂಠ ಹೇಳಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಂವಿಧಾನ ರಕ್ಷಣೆಗಾಗಿ ಬಿಎಸ್ಪಿಯಿಂದ ರಾಜ್ಯ ವ್ಯಾಪಿ ಸೆ.28ರಿಂದ ಪ್ರಾರಂಭಗೊಂಡು ನ.13ರವರೆಗೆ ನಡೆ ಯಲಿರುವ ಜೈಭೀಮ್ ಜನ ಜಾಗೃತಿ ಜಾಥಾ ನ.9ರಂದು ಬೆಳಗ್ಗೆ 9 ಗಂಟೆಗೆ ತಾಲೂಕಿನ ಹೆಡಿಯಾಲ ಗ್ರಾಮದ ಮೂಲಕ ನಂಜನಗೂಡನ್ನು ಪ್ರವೇಶಿಸಲಿದ್ದು, ಬಳಿಕ ಮಡುವಿನಹಳ್ಳಿ, ಹುರ ಹಾಗೂ ಹುಲ್ಲಹಳ್ಳಿ ಮಾರ್ಗದಲ್ಲಿ ನಂಜನಗೂಡನ್ನು ಪ್ರವೇಶಿಸಲಿದೆ. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಖಾಸಗಿ ಬಸ್ ನಿಲ್ದಾಣದ ಬಳಿ ಪಕ್ಷದ ಪ್ರಮುಖರು ಬಾಬಾ ಸಾಹೇಬ್ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಗೃತಿ ರಥವನ್ನು ತಿ.ನರಸೀಪುರಕ್ಕೆ  ಬೀಳ್ಕೊಡಲಿದ್ದಾರೆ,'' ಎಂದು ಅವರು ಹೇಳಿದರು.
ಬಿಎಸ್ಪಿ ತಾಲೂಕು ಘಟಕದ ಅಧ್ಯಕ್ಷ ಡಿ.ಕೆ.ಶಿವಣ್ಣ ಮಾತ ನಾಡಿ,“ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅವರ ಆಶಯಗಳಿಗೆಆಡಳಿತಾರೂಢ ಸರಕಾರಗಳು ಧಕ್ಕೆ ತಂದ್ದೊಡುವ ಮೂಲಕದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲು ಮುಂದಾಗಿವೆ.ಮೀಸಲಾತಿಯನ್ನು ಬಲಹೀನಗೊಳಿಸುವ ಸಂಚು ನಡೆಯುತ್ತಿದ್ದುಜೊತೆಗೆ ಸಾರ್ವಜನಿಕ ವಲಯದ ಸೇವೆಗಳನ್ನು ಖಾಸಗೀ ಕರಣಗೊಳಿಸುವಮೂಲಕ ರಾಷ್ಟ್ರದ ಹಿತಕ್ಕೆಧಕ್ಕೆತರಲಾಗುತ್ತಿದೆ. ಹೀಗಾಗಿ ಜಾಥಾ ಕೈಗೊಂಡಿದ್ದು, ಜಾಥಾದಲ್ಲಿಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣ ಮೂರ್ತಿ ಹಾಗೂ ರಾಜ್ಯ ಸಂಯೋಜಕಮಾರಸಂದ್ರ ಮುನಿಯಪ್ಪ ಪಾಲ್ಗೊಂಡು ಜನ ಜಾಗೃತಿ ಮೂಡಿಸಲಿದ್ದಾರೆ,'' ಎಂದರು.ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಪುರುಷನಾಥ್,ಜಯಮೂರ್ತಿ,ಚೆನ್ನಬಸವಯ್ಯ,  ಸಿದ್ಧರಾಜು,ಮಹದೇವಯ್ಯ, ರಂಗಸ್ವಾಮಿ, ಕೆಂಪಣ್ಣಪುಟ್ಟರಯ್ಯ ಸೇರಿದಂತೆಮತ್ತಿತರರು ಇದ್ದರು.

No comments

Post a Comment