ಶನಿವಾರಸಂತೆ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಪುನರ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮನವಿ

No comments

ಶನಿವಾರಸಂತೆ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಪುನರ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಪತ್ರಿಕೆ ಹೇಳಿಕೆ ಮುಖಾಂತರ  ಮನವಿ

ಸೋಮವಾರಪೇಟೆ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ 3ತಿಂಗಳಿನಿಂದ ಆಧಾರ್ ಸೇವೆ ನಿಂತು ಹೋಗಿದ್ದು, ಕಂಪ್ಯೂಟರ್ ರಿಪೇರಿಯಿಂದ ಆಧಾರ್ ಸೇವೆ ನಿಂತು ಹೋಗಿರುತ್ತದೆ .ಇದನ್ನು ಬೇಗನೆ ಸರಿಪಡಿಸಬೇಕೆಂದು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಹಾಗೂ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಧಾರ್ ಸೆಕ್ಷನ್ ನಲ್ಲಿರುವ ಸೋಮಶೇಖರ್ ರವರನ್ನು ಭೇಟಿ ಮಾಡಿ ಆದಷ್ಟು ಬೇಗನೆ ಸರಿಪಡಿಸಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರು ಈ ಮೊದಲೆ ತಿಳಿಸಿದ್ದರು ಸರಿಪಡಿಸಿಲ್ಲ, ಆದರೂ ಈವರೆಗೂ ಆಧಾರ್ ಕಾರ್ಡ್ ತೆಗೆಯುವಲ್ಲಿ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ .ಯಾಕೆ ಅಂತ ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಯವರು  ಬೇಗನೆ ಕ್ರಮ ಕೈಗೊಂಡು ಆಧಾರ್ ಕಾರ್ಡ್ ತೆಗೆಯುವಂತೆ  ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ .. ಹೊರಗಡೆ (ಪ್ರವೇಟ್) ನಲ್ಲಿ ಆಧಾರ್ ಕಾರ್ಡ್ ಮಾಡಿಸಿದರೆ ಬಡವರ ಸುಲಿಗೆ ಆಗುತ್ತಿರುವ ಬಗ್ಗೆ   ಈ ಹಿಂದೆ ಕರವೇ ಕಾರ್ಯಕರ್ತರು ತಿಳಿಸಿದರು. ಆದರೂ  ಈವರೆಗೂ ಆಧಾರ್ ಕಾರ್ಡ್  ಸೆಂಟರ್ ಪ್ರಾರಂಭ ಮಾಡದಿರಲು  ಏನು ಕಾರಣ ಎಂದು ಕರವೇ ಕಾರ್ಯಕರ್ತರ ಪ್ರಶ್ನಿಸಿದ್ಧಾರೆ.

 ಶನಿವಾರಸಂತೆ ಕಂದಾಯ ಇಲಾಖೆಯಲ್ಲಿರುವ  ನೆಮ್ಮದಿ ಕೇಂದ್ರದಲ್ಲಿರುವ ಆಧಾರ್ ಕಾರ್ಡ್  ಓಪನ್ ಮಾಡಬೇಕೆಂದು ಕರವೇ ಕಾರ್ಯಕರ್ತರು ಮನವಿ ಮಾಡಿದ್ದಾರೆ.

No comments

Post a Comment