ಕೊಡಗು - ಕೊರೋನಾ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಗೆ ಜ್ವರ : ಯಾರೂ ಆತಂಕ ಪಡುವುದು ಬೇಡ : ಜಿಲ್ಲಾಧಿಕಾರಿ

No comments
ಮಡಿಕೇರಿ (Times Of Coorg) : ಇತ್ತೀಚೆಗೆ ಕೊರೋನಾ ಪಾಸಿಟಿವ್ ಆಗಿ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದು ಸ್ವಂತ ಪ್ರೇರಿತರಾಗಿ ಆಸ್ಪತ್ರೆಯ ಐಸೋಲೆಷನ್ ವಾರ್ಡ್ ಗೆ ದಾಖಲಾಗಿದ್ದಾರೆ. 

ವೈದ್ಯರು ಗಂಟಲು ದ್ರವ್ಯವನ್ನು ಪರೀಕ್ಷೆ ಮಾಡಲು ಕಳುಹಿಸಿದ್ದು. ಯಾರು ಕೂಡ ಆತಂಕ ಪಡುವುದು ಬೇಡ. ನಾಳೆ ವೈದ್ಯಕೀಯ ಪರೀಕ್ಷಾ ವರದಿ ಬಂದ ನಂತರ ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. 

No comments

Post a Comment