ದೆಹಲಿ ನಿಜಾಮುದ್ದೀನ್ ಧಾಮಿ೯ಕ ಸಭೆಯಲ್ಲಿ ಜಿಲ್ಲೆಯಿಂದ 22 ಮಂದಿ ಭಾಗಿ : ಜಿಲ್ಲಾಧಿಕಾರಿ

No comments
ಮಡಿಕೇರಿ ( Times Of Coorg ): ದೆಹಲಿ ಧಾಮಿ೯ಕ ಸಭೆಯಲ್ಲಿ ಜಿಲ್ಲೆಯಿಂದ ಪಾಲ್ಗೊಂಡವರ ಬಗ್ಗೆ ಈ ಕಚೇರಿಯಿಂದ ದಿನಾಂಕ:01-04-2020 ರಂದು ನೀಡಿದ ಮಾಹಿತಿಯನ್ನು ಮುಂದುವರೆಸುತ್ತಾ, ಜಿಲ್ಲೆಯಲ್ಲಿ ಮತ್ತೆ 10 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಿಂದ ದೆಹಲಿಗೆ ತೆರಳಿದವರ ಸಂಖ್ಯೆ ಒಟ್ಟು 22 ಆಗಿರುತ್ತದೆ. 

ಈಗಾಗಲೇ ನೀಡಿರುವ ಮಾಹಿತಿಯಂತೆ 05 ಜನರು ದೆಹಲಿಯಲ್ಲಿ ಕ್ವಾರಂಟೈನ್ ನಲ್ಲಿ ಇರುತ್ತಾರೆ ಮತ್ತು ಇನ್ನೂ 05 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಉಳಿದ ಎಲ್ಲಾ 12 ಜನರನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಲಾಗಿದ್ದು, ಇವರಿಗೆ ಕೊರೋನಾ ವೈರಸ್ ನ ಲಕ್ಷಣಗಳಿರುವುದಿಲ್ಲ. ಆದಾಗ್ಯೂ ಇವರ ಗಂಟಲು ದ್ರವ ಮಾದರಿಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

No comments

Post a Comment