ಫೆ 3ರಿಂದ 6ರ ವರಗೆ ಪಾಲಿಬೆಟ್ಟ ಇತಿಹಾಸ ಪ್ರಸಿದ್ಧ ಉರೂಸ್ .
ಸಿದ್ದಾಪುರ :- ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಫೆ 3,4,5,6ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ .ಫೆ 3ರಂದು ಶುಕ್ರವಾರ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟನೆ ಮಾಡಲಿದ್ದು.ಧಾರ್ಮಿಕ ಪಂಡಿತ ಸಯ್ಯದ್ ಮೆಹರೂಫ್ ಅಲ್ ಜಫ್ರಿ ತಂಗಳ್ ದುಆ ದುವ ನೇತೃತ್ವ ವಹಿಸಲಿದ್ದಾರೆ ರಾತ್ರಿ ಮತ ಪ್ರಭಾಷಣ ಮತ್ತು ದಿಕ್ರ್ ದುವಾ ಮಜ್ಲೀಸ್ ನೇತೃತ್ವವನ್ನಸಯ್ಯದ್ ಸರುಫುದ್ದೀನ್ ಐಲ್ ಹೈದ್ರೊಸಿ ತಂಗಳ್ ವಹಿಸಲಿದ್ದಾರೆ.ಫೆ 4 ರಂದು ರಾತ್ರಿ ಧಾರ್ಮಿಕ ಪಂಡಿತ ಆಫೀಜ್ ಜುನೈದು ಜೌಹರಿ ಅಲ್ ಅಝರಿ ಪ್ರಭಾಷಣ ಮಾಡಲಿದ್ದಾರೆ.ಫೆ 5 ರಂದು ರಾತ್ರಿ ಅಬ್ದುಲ್ಲ ಸಲೀಂ ವಾಫಿ ಅಂಬಲಕಂಡಿ ಅವರಿಂದ ಮತ ಪ್ರವಚನ ಹಾಗೂ ಫೆ 6 ರಂದು ಸಂಜೆ 7-00 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದುಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ,ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ ರ ಫಾ. ಮರಿಯಾ ರಾಜ್ ಜಾರ್ಜ್, ಕಕ್ಕಿಂಜೆ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕೊಡಗು ಜಿಲ್ಲಾ ಖಾಝಿಗಳಾದ ಶಾದುಲಿ ಪೈಝಿ,ಎಂ.ಎಂ ಅಬ್ದುಲ್ ಪೈಝಿ ಸೇರಿದಂತೆ ದಾರ್ಮಿಕ ಪಂಡಿತರು,ದರ್ಮಗುರುಗಳು,ಸಮಾಜಸೇವಕರು,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಫೆ 6ರದು ಸಂಜೆ 6.30ಗಂಟೆಯಿಂದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯ ನಡೆಯಲಿದೆ .
No comments
Post a Comment