ಗುಂಡ್ಲುಪೇಟೆ,: ರಾಷ್ಟ್ರೀಯ ಜನಶಕ್ತಿ ಕಾಂಗ್ರೆಸ್ ಸಮಿತಿಗೆ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಗುಂಡ್ಲುಪೇಟೆಯ ಜೈಲಾಬ್ ಅವರನ್ನು ಆಯ್ಕೆ ಮಾಡಲಾಗಿದೆ.ಗುಂಡ್ಲುಪೇಟೆಯಲ್ಲಿ ನಡೆದ ರಾಷ್ಟ್ರೀಯ ಜನಶಕ್ತಿ ಕಾಂಗ್ರೆಸ್ ಕಮಿಟಿಯ ಜಿಲ್ಲಾ ಸಮಿತಿಯ ಆಯ್ಕೆ ಸಭೆಯಲ್ಲಿ ಜನಶಕ್ತಿ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮನೋಜ್ ಶಂಕರನ್ ನಲ್ಲೂರ್ ಪಕ್ಷದ ಧ್ವಜ ನೀಡುವ ಮೂಲಕ ಗುಂಡ್ಲುಪೇಟೆಯ ಜೈಲಾಬ್ ಅವರನ್ನು ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದರುರಾಷ್ಟ್ರೀಯ ಅಧ್ಯಕ್ಷ ಮನೋಜ್ ಶಂಕರನಲ್ಲೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುವಂಥಾಗಿದೆ. ರೈತರು ಕಷ್ಟಪಟ್ಟು ಬೆಳೆದ ಕೃಷಿ ಪಸಲಗಳು ಕಾಡು ಪ್ರಾಣಿಗಳ ಪಾಲಾಗುತ್ತಿದ್ದು ಮಳೆ ಅಭಾವದಿಂದಲೂ ಕೃಷಿ ಪಸಲಿನಿಂದ ನಷ್ಟ ಅನುಭವಿಸುತ್ತಿದ್ದಾರೆ.ಸಾಲ ಸೋಲ ಮಾಡಿ ರೈತರು ಬೆಳೆದ ಪಸಲುಗಳಿಗೆ ಬೆಂಬಲ ಬೆಲೆ ಸಿಗದೆ ಸಂಕಷ್ಟದೊಂದಿಗೆ ಸಮಸ್ಯೆಯಲ್ಲಿದ್ದಾರೆ. ಕೂಲಿ ಕೆಲಸವನ್ನು ನಂಬಿ ಜೀವನ ನಡೆಸುತ್ತಿರುವ ಕಾರ್ಮಿಕ ಕುಟುಂಬಗಳ ಕನಿಷ್ಠ ವೇತನ ಬೇಡಿಕೆ ಇಂದಿಗೂ ಈಡೇರಲಿಲ್ಲ ಇದರೊಂದಿಗೆ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಮನೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಸರ್ಕಾರ ಗಂಭೀರವಾಗಿ ಸ್ವಂಧಿಸುತ್ತಿಲ್ಲ ಎಂದು ಆರೋಪಿಸಿದ ಅವರು ರಾಷ್ಟ್ರೀಯ ಜನಶಕ್ತಿ ಕಾಂಗ್ರೆಸ್ ಸಮಿತಿ ಮೂಲಕ ಜನಸಾಮಾನ್ಯರಲ್ಲಿ ಕಾಂಗ್ರೆಸ್ ಸಾಧನೆಯನ್ನು ಜಾಗೃತಿ ಮೂಡಿಸುವುದರೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು ಇದೇ ಸಂದರ್ಭ ಜಿಲ್ಲಾ ಸಮಿತಿಗೆ ಕೊಡಳ್ಳಿ ಶೇಕ್ ಮೊಹಮ್ಮದ್, ಗುಂಡ್ಲುಪೇಟೆಯ ಅಲಿ, ಅಕ್ರಂಪಾಶ, ಫಾರೂಕ್, ಸಯ್ಯದ್, ಶೇಕ್ ಮಹಮ್ಮದ್,ಬೆಟ್ಟಳ್ಳಿ ರೇವಣ್ಣ, ಕೃಷ್ಣ ಪಂಜನಹಳ್ಳಿ, ಅಗತ ಗೌಡನಹಳ್ಳಿಯ ಚೇತನ್, ಸ್ವಾಮಿ, ಕೊಡಸೋಗೆ ಸಿದ್ದರಾಜು ಸೇರಿದಂತೆ ಮತ್ತಿತರರನ್ನ ನೂತನ ಸಮಿತಿಗೆ ಆಯ್ಕೆ ಮಾಡಲಾಯಿತು ರಾಷ್ಟ್ರೀಯ ಜನಶಕ್ತಿ ಕಾಂಗ್ರೆಸ್ ಸಮಿತಿಯ ಸಂಶೀರ್, ವೈನಾಡು ಮಣಿಲಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
No comments
Post a Comment