ಬಂದ್ ಗೆ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಬೆಂಬಲ : ಜೆ.ಕೆ ರಾಮು

No comments

ಸಿದ್ದಾಪುರ (Times Of Coorg) : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸೆ.೨೮ರಂದು ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘ ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ತಾಲ್ಲೂಕು ಅಧ್ಯಕ್ಷ ಜೆ.ಕೆ ರಾಮು ತಿಳಿಸಿದ್ದಾರೆ. ದೇಶಕ್ಕೆ ಬೆನ್ನೆಲುಬಾಗಿರುವ ರೈತರನ್ನು ಕಡೆಗಣಿಸುವ ಮೂಲಕ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಅನುಸರಿಸುತ್ತಿರುವ ಕೇಂದ್ರ ರಾಜ್ಯ ಹಾಗೂ ಸರ್ಕಾರದ ನಡೆ ಖಂಡನೀಯ.

ಕೊಡಗು ಜಿಲ್ಲೆಯಲ್ಲಿ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ .ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಕಳೆದ ಹಲವು ವರ್ಷಗಳಿಂದಲೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಯಾವುದೇ ಯೋಜನೆಗಳನ್ನು ಘೋಷಿಸದೆ ಸಾಲ ಮನ್ನಾ ಮಾಡದೇ ಎಲ್ಲ ರೀತಿಯಲ್ಲೂ ಕಡೆಗಣಿಸಿದ್ದಾರೆ.ಜಿಲ್ಲೆಯಲ್ಲಿ 75 ಸಾವಿರದಷ್ಟು ಆದಿವಾಸಿ ಬುಡಕಟ್ಟು ಜನ ವಾಸವಾಗಿದ್ದು. ಆದಿವಾಸಿ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಮನೆ ಸೇರಿದಂತೆ  ಮೂಲ ಸೌಕರ್ಯ ವಂಚಿತರಾಗಿದ್ದಾರೆ.ಹದಿನೈದು ವರ್ಷಗಳ ಹಿಂದೆ ಅರಣ್ಯ ಮಸೂದೆ ಕಾಯ್ದೆ ಜಾರಿಯಾಗಿದ್ದರೂ ಇಂದಿಗೂ ಮೂಲ ಸೌಕರ್ಯ ವಂಚಿತ ರಾಗಿಯೇ ಬದುಕು ಸಾಗಿಸುತ್ತಿದ್ದಾರೆ.ಕೆಲವೆಡೆ ಆದಿವಾಸಿ ಬುಡಕಟ್ಟು ಕೃಷಿಕರಾಗಿದ್ದರು ಆರ್ಥಿಕ ಸಮಸ್ಯೆಯಿಂದ ಹಿಂದುಳಿದಿದ್ದಾರೆ.ಕೃಷಿ ಅಭಿವೃದ್ಧಿ ಮೂಲಕ ಮುಂದೆ ತರುವಲ್ಲಿ ಸರ್ಕಾರ ವಿಫಲವಾಗಿದೆ.ರೈತರು, ಕಾರ್ಮಿಕರು, ಆದಿವಾಸಿಗಳನ್ನ ಕಡೆಗಣಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕರೆ ನೀಡಿರುವ ಬಂದ್ ಗೆ  ಬುಡಕಟ್ಟು ಕೃಷಿಕರ  ಸಂಘ ಸಂಪೂರ್ಣ ಸೂಚಿಸಿಸಲಿದೆ ಎಂದರು   

No comments

Post a Comment