ವಿರಾಜಪೇಟೆ ( TOC ನ್ಯೂಸ್) : ಸಮಸ್ತ ಕೇರಳ ಜಂಞಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾ ಮತ್ತು ವಿರಾಜಪೇಟೆ ರೇಂಜ್ ಮುಅಲ್ಲಿಂ ಡೇ ಉದ್ಘಾಟನಾ ಸಮಾರಂಭ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದರಸ ಆವರಣದಲ್ಲಿ ನಡೆಯಿತು. ಇದರ ಜೊತೆಗೆ ದಾರುಲ್ ಇಸ್ಲಾಂ ಮದರಸ ಸಮ್ಮೇಳನ ಕೂಡ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಖಾಝಿ ಅಬ್ದುಲ್ಲಾ ಫೈಝಿ , ಅಬ್ದುಲ್ ರಹ್ಮಾನ್ ಉಸ್ತಾದ್ ಗೋಣಿಕೊಪ್ಪ, ಖಲೀಲ್ ಫೈಝಿ ವಿರಾಜಪೇಟೆ, ಇಸ್ಮಾಯಿಲ್ ಉಸ್ತಾದ್ ಕಲ್ಲುಬಾಣೆ, ಅಬೂಬಕರ್ ಉಸ್ತಾದ್ ಮೀನ್ ಪೇಟೆ, ಜಮಾಅತ್ ಖತೀಬ್ ರಫೀಖ್ ಬಾಖವಿ ಉಪಸ್ಥಿತರಿದ್ದರು.
