ಮಂಜಿನ ನಗರಿಯಲ್ಲಿ ನಟ ಹುಚ್ಚಾ ವೆಂಕಟ್ಗೆ ಬಿತ್ತು ಸಾರ್ವಜನಿಕ ಗೂಸಾ..

No comments

 ಮಡಿಕೇರಿ; ಒಂದಲ್ಲಾ ಒಂದು ವಿವಾದ, ಹುಚ್ಚಾಟ, ರಂಪಾಟಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟ ಹುಚ್ಚಾ ವೆಂಕಟ್ಗೆ ಕೊಡಗು ಜಿಲ್ಲೆಯ ಮಡಿಕೇಯಲ್ಲಿ ಗುರುವಾರ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಮಡಿಕೇರಿ ನಗರದ ಕೆ.ಎಸ್.ಆರ್. ಟಿ.ಸಿ ಬಸ್ಸ್ ಟಿಪೋ ಬಳಿ ಹುಚ್ಚಾ ವೆಂಕಟ್ ಹಲ್ಲೆ ಮಾಡಿ ನಾಪೋಕ್ಲುವಿನ ದಿಲೀಪ್ ಅವರಿಗೆ ಸೇರಿದ ಕಾರಿನ ಗಾಜು ಪುಡಿಪುಡಿ ಮಾಡಿ ಹುಚ್ಚಾ ವೆಂಕಟ್ ತನ್ನ ರಂಪಾಟ ಮೆರೆದಿದ್ದಾನೆ. ಸಿಟ್ಟಿಗೆದ್ದ ನೆರದಿದ್ದ ಸಾರ್ವಜನಿಕರು ಹಾಗೂ ಕಾರಿನ ಮಾಲೀಕ ವೆಂಕಟ್ಗೆ ಏಟಿನ ಮೂಲಕ ಪಾಠ ಮಾಡಿದ್ದಾರೆ. ನಟ ಹುಚ್ಚಾ ವೆಂಕಟ್ ಅವರನ್ನು ಮಡಿಕೇರಿ ನಗದ ಪೊಲೀಸರು ಬಂಧಿಸಿದರು.

No comments

Post a Comment