ವರದಿ : ಟೈಮ್ಸ್ ಆಫ್ ಕೂರ್ಗ್
ಕುಟ್ಯಾಡಿ : ಉತ್ತರ ಕರ್ನಾಟಕ ಪ್ರಳಯ ಸಂಧರ್ಭ ಸೇತುವೆ ಮೇಲೆ ಧುಮ್ಮುಕ್ಕಿ ಹರಿಯುತ್ತಿರುವ ನೀರಿನಲ್ಲಿ ನಡೆದುಕೊಂಡು ಅಂಬ್ಯುಲೆನ್ಸ್ ಗೆ ದಾರಿ ತೋರಿಸಿದ ರಾಯಚೂರಿನ ಹುಡುಗ ವೆಂಕಟೇಶ್ ಗೆ ನೆರೆರಾಜ್ಯ ಕೇರಳದಲ್ಲಿ ಸನ್ಮಾನ ದೊರೆತಿದೆ. ಇತ್ತೀಚೆಗೆ ಸ್ವಾತಂತ್ರೋತ್ಸವ ಸಂಧರ್ಭ ರಾಯಚೂರು ಜಿಲ್ಲಾಡಳಿತ ವತಿಯಿಂದ ಶೌರ್ಯ ಪ್ರಶಸ್ತಿ ನೀಡಲಾಗಿತ್ತು. ಇದೀಗ ಕೇರಳದ ಕುಟ್ಯಾಡಿ ಎಂಬಲ್ಲಿಯ ಜನತೆಗೆ ವೆಂಕಟೇಶ್ ನನ್ನು ರಾಯಚೂರಿನಿಂದ ಕರೆದೊಯ್ದು ಸನ್ಮಾನಿಸಿದ್ದಾರೆ. ಸ್ಥಳಿಯ ಪತ್ರಕರ್ತ ರಶೀದ್ ಅವರು ತಾನೇ ಮುತುವರ್ಜಿ ವಹಿಸಿ ಕರೆತಂದಿದ್ದಾರೆ. ಬಡ ಕುಟುಂಬದ ಹುಡುಗನಾಗಿದ್ದರಿಂದ ಕುಟ್ಯಾಡಿ ಜನತೆ ಅಲ್ಲಿಯೇ ಸಹಾಯಹಸ್ತ ಚಾಚಿದ್ದಾರೆ.




No comments
Post a Comment